ಈ ನಾಲ್ಕು ರಾಶಿಗಳ ಜನರು ಆಮೆಯ ಉಂಗುರವನ್ನು ಅಸಲು ಧರಿಸಬಾರದು.

ಸ್ನೇಹಿತರೆ ಈ ನಾಲ್ಕು ರಾಶಿಗಳ ಜನರು ಆಮೆಯ ಉಂಗುರವನ್ನು ಅಸಲು ಧರಿಸಬಾರದು. ಹಾಗಾದರೆ ಆಮೆ ಉಂಗುರವನ್ನು ಏಕೆ ಧರಿಸುತ್ತಾರೆ ಮತ್ತು ಅದರ ವಿಶೇಷತೆಯನ್ನು ಹಾಗು ಮುಖ್ಯವಾಗಿ ಯಾವ ನಾಲ್ಕು ರಾಶಿಯ ಜನರು ಆಮೆಯ ಉಂಗುರವನ್ನು ಧರಿಸಬಾರದು ಮತ್ತು ಏಕೆ ಧರಿಸಬಾರದು. ಇವರು ಧರಿಸುವುದರಿಂದ ಎಂತಹ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂಬಂತಹ ವಿಷಯಗಳನ್ನು ಈ ದಿನದ ಈ ವಿಡಿಯೋದಲ್ಲಿ ತಿಳಿಯೋಣ.

ಸ್ನೇಹಿತರೆ ಆಮೆ ನೀರಿನಲ್ಲಿ ವಾಸಿಸುವಂತಹ ಜೀವಿ ಆಮೆಯನ್ನು ಶುಭಪ್ರದವೆಂದು ಭಾವಿಸುತ್ತಾರೆ. ಇದು ಅದೃಷ್ಟವನ್ನು, ಆರೋಗ್ಯವನ್ನು ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. ಆಮೆಯ ಉಂಗುರವನ್ನು ಧರಿಸುವ ವ್ಯಕ್ತಿ ಯಾವಾಗಲೂ ಸಂತೋಷವಾಗಿ ಮತ್ತು ಸಕಲ ಅನುಕೂಲಗಳಿಂದ ಇರುತ್ತಾನೆಂದು ನಮ್ಮ ಪುರಾಣಗಳಲ್ಲಿಯೂ ಕೂಡ ಪ್ರಸ್ತಾಪಿಸಲಾಗಿದೆ.

ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ 10 ಅವತಾರಗಳಲ್ಲಿ ಕೂರ್ಮ ಅವತಾರವು ಕೂಡ ಒಂದು. ಲಕ್ಷ್ಮಿ ದೇವಿಯು ಕೂಡ ನೀರಿನಿಂದ ಜನಿಸಿರುವುದರಿಂದ ಆಕೆಯನ್ನು ಭಕ್ತಿಯಿಂದ ಪೂಜಿಸಿದರೆ ಐಶ್ವರ್ಯ ಲಭಿಸುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.ಅದೇ ರೀತಿಯಾಗಿ ಆಮೆಯ ಗುರುತಿನ ಉಂಗುರವನ್ನು ಧರಿಸದವರು ಕೂಡ ಜೀವನದಲ್ಲಿ ವಿಜಯವನ್ನು ಸಾಧಿಸುತ್ತಾರೆ. ಆದರೆ ಈ ಆಮೆಯ ಉಂಗುರವನ್ನು ನಾವು ಇಷ್ಟಬಂದಂತೆ ಧರಿಸಬಾರದು.

ಅದನ್ನು ಧರಿಸಬೇಕಾದರೆ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ ಎಂದು ಹೇಳುತ್ತಾರೆ ಪಂಡಿತರು. ಆದ್ದರಿಂದಲೇ ಆಮೆಯ ಉಂಗುರವನ್ನು ಧರಿಸಬೇಕಾದರೆ ಕೆಲವು ತಪ್ಪುಗಳನ್ನು ಅಸಲು ಮಾಡಬಾರದು. ಈ ಉಂಗುರವನ್ನು ಧರಿಸುವುದರಿಂದ ಆ ವ್ಯಕ್ತಿಯ ಜೀವನವು ಸುಧಾರಿಸುತ್ತದೆ ಎಂದು ನಮ್ಮ ಪುರಾತನ ಕಾಲದಿಂದಲೂ ನಂಬುತ್ತಿದ್ದಾರೆ.ಆಮೆಯ ಉಂಗುರವನ್ನು ಕೊಂಡುಕೊಳ್ಳಬೇಕಾದರೆ ಅಥವಾ ಧರಿಸಬೇಕಾದರೆ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.

ಈ ಉಂಗುರವನ್ನು ಧರಿಸುವರು ಮಧ್ಯ ಬೆರಳಿಗೆ ಆಗಲಿ ಅಥವಾ ತೋರು ಬೆರಳಿಗೆ ಆಗಲೇ ಧರಿಸಬೇಕು. ಇದನ್ನು ಬಲಗೈಗೆ ಮಾತ್ರವೇ ಧರಿಸಬೇಕು.ಶುಕ್ರವಾರವನ್ನು ತಾಯಿ ಲಕ್ಷ್ಮಿ ದೇವಿಗೆ ಇಷ್ಟವಾದಂತಹ ಪವಿತ್ರ ವಾರ ಎಂದು ಕರೆಯುತ್ತಾರೆ. ಈ ಶುಕ್ರವಾರ ಅಥವಾ ಗುರುವಾರದ ದಿನ ಮಾತ್ರವೇ ಆಮೆಯ ಉಂಗುರವನ್ನು ಕೊಂಡುಕೊಂಡು ಅಥವಾ ತಯಾರು ಮಾಡಿಸಿಕೊಂಡು ನೀವು ಧರಿಸುವುದರಿಂದ ಉತ್ತಮ ಫಲಗಳು ಲಭಿಸುತ್ತವೆ.

ಆಮೆ ಉಂಗುರವನ್ನು ಧರಿಸಿದಾಗ ಅದರ ಮುಖ ನಮಗೆ ಇದುರಾಗಿರಬೇಕು. ನಮಗೆ ವಿರುದ್ಧ ದಿಕ್ಕಿನಲ್ಲಿ ಇರಬಾರದು. ಹಾಗೇನಾದರೂ ವಿರುದ್ಧ ದಿಕ್ಕಿನಲ್ಲಿದ್ದರೆ ಅದು ನಮಗೆ ಅಶುಭ ಫಲಗಳನ್ನು ಕೊಡುತ್ತದೆ.ಆಮೆ ಉಂಗುರವನ್ನು ಧರಿಸಿ ನೀವು ಉತ್ತಮ ಪ್ರಯೋಜನಗಳನ್ನು ಪಡೆಯಬೇಕಾದರೆ ಪಂಚದಾತು ಅಷ್ಟಧಾತು ಮತ್ತು ಬಿಳಿ ಆಮೆ ಉಂಗುರಗಳು ಒಳ್ಳೆಯದು.

ಹಾಗೆ ಆಮೆಯ ಉಂಗುರವನ್ನು ಧರಿಸುವ ಮೊದಲು ಆ ಉಂಗುರವನ್ನು ಶುದ್ಧವಾದ ಹಾಲಿನಲ್ಲಿ ಅಥವಾ ಗಂಗಾಜಲದಲ್ಲಿ ನೆನೆಸಿ ಅದನ್ನು ಲಕ್ಷ್ಮಿ ದೇವಿಯ ಚಿತ್ರಪಟ ಅಥವಾ ವಿಗ್ರಹದ ಮುಂದೆ ಪೂಜಿಸಿ ಧರಿಸಬೇಕು. ಹಾಗೆ ಮಾಡುವುದರದಿಂದ ಉಂಗುರಕ್ಕೆ ದೈವಿಕ ಶಕ್ತಿ ಬರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಮತ್ತು ಪದೇ ಪದೇ ಈ ಉಂಗುರವನ್ನು ತೆಗೆಯಬಾರದು. ಅದು ಅಸಲು ಒಳ್ಳೆಯದಲ್ಲ. ಯಾರು ಈ ಎಲ್ಲ ನಿಯಮಗಳನ್ನು ಪಾಲಿಸಿ ಆಮೆ ಉಂಗುರವನ್ನು ಧರಿಸುತ್ತಾರೋ ಅವರಿಗೆ ಸಂಪತ್ತು ಮತ್ತು ಶ್ರೇಯಸ್ಸು ಲಭಿಸುತ್ತದೆ.

ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.