ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ?

Featured Article

ಪ್ರತಿಯೊಬ್ಬ ಮಹಿಳೆಯು ತಪ್ಪದೇ ತಿಳಿದುಕೊಳ್ಳ ಬೇಕಾದ ಮಾಹಿತಿ ಇದು, ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ತಮ್ಮ ತಮ್ಮ ಮನೆ ದೇವರ ಹೆಸರನ್ನು ಹೇಳಿ ಅಥವಾ ಮಹಾಲಕ್ಷ್ಮಿಯ ಸ್ವರೂಪ ಎಂದು ಅಥವಾ ತಾಯಿ ಗೌರಿಯ ಸಂಕೇತ ಎಂದು ಮನೆಯಲ್ಲಿ ಕಳಸಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ರೀತಿ ಕಳಸವು ಮನೆಯಲ್ಲಿದ್ದರೆ ಸಾಕ್ಷಾತ್ ತಾಯಿ ಮನೆಯಲ್ಲಿ ನೆಲೆಸಿದ್ದಾಳೆ.ಎನ್ನುತ್ತಾರೆ ಶಾಸ್ತ್ರ ಪಂಡಿತರು.

ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಈ ಕಳಸವು ಇಡೀ ಮನೆಯ ಏಳಿಗೆಯ ಸಂಕೇತ ಆಗಿರುತ್ತದೆ. ಕಳಸ ಪ್ರತಿಷ್ಠಾಪನೆ ಮಾಡುವುದಕ್ಕೆ ಕಟ್ಟು ನಿಟ್ಟಾದ ವಿಧಿವಿಧಾನಗಳು ಇದ್ದು, ಆ ಪ್ರಕಾರವಾಗಿ ನಡೆದುಕೊಂಡಾಗ ಮಾತ್ರ ಆ ಮನೆಗೆ ಶ್ರೇಯಸ್ಸು ಲಭಿಸುತ್ತದೆ. ಕಳಸ ಪ್ರತಿಷ್ಠಾಪನೆ ಮಾಡಿದ ಮೇಲೆ ಅದನ್ನು ವಾರಕ್ಕೊಮ್ಮೆ ಅವರ ಅನುಕೂಲತೆ ಅಂತೆ ಬದಲಾಯಿಸುತ್ತಾರೆ.

ಈ ರೀತಿ ಕಳಸಕ್ಕೆ ಇಡುವ ಪ್ರತಿಯೊಂದು ವಸ್ತು ಕೂಡ ಪವಿತ್ರವಾಗಿದೆ.ಮಡಿಯಿಂದ ಅದನ್ನು ಇಡಲಾಗುತ್ತದೆ. ಕಳಸಕ್ಕೆ ಇರುವ ನೀರಿನಿಂದ ಹಿಡಿದು ಬಳಸುವ ಎಲೆಯ ತನಕವು ಕೂಡ ಅದು ಒಡೆದಿರಬಾರದು. ನೀರು ಮಡಿಯಾಗಿರಬೇಕು, ಶುದ್ಧವಾಗಿರಬೇಕು. ಎಲ್ಲ ಮುಂಜಾಗ್ರತೆಯನ್ನು ತೆಗೆದುಕೊಳ್ಳಲಾಗುತ್ತದೆ. ಈ ರೀತಿ ಎಷ್ಟು ಅಚ್ಚುಕಟ್ಟಾಗಿ ಹಾಗೂ ಭಯ ಭಕ್ತಿಗಳಿಂದ ಪೂಜಿಸುತ್ತೇವೋ ಅಷ್ಟೇ ಪ್ರಕಾರವಾಗಿ ಆಶೀರ್ವಾದ ನಮಗೆ ಸಿದ್ಧಿ ಆಗುತ್ತದೆ.

ಜೊತೆಗೆ ಮನೆಯಲ್ಲಿರುವ ಕಳಸವೇ ಶಕುನಗಳನ್ನು ಹೇಳುತ್ತದೆ.ಎನ್ನುವುದನ್ನು ನಾವು ನಂಬಲೇಬೇಕು. ಏಕೆಂದರೆ ಕಳಸದ ಕಾಯಿಯನ್ನು ನೋಡಿ ಅದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಮನೆಗಳಲ್ಲಿ ಕಳಸದ ಕಾಯಿಯನ್ನು ಇಟ್ಟ ಕೆಲವೊಮ್ಮೆ ಅದು ಮೊಳಕೆ ಬಂದಿರುತ್ತದೆ. ಈ ರೀತಿ ಆದಾಗ ಅಥವಾ ಅದರಲ್ಲಿ ಬಿರುಕು ಮೂಡಿದಾಗ ಜನರು ಗೊಂದಲಕ್ಕೆ ಒಳಗಾಗುತ್ತಾರೆ.

ಅದು ಶುಭ ಸೂಚಕವೋ ಅಥವಾ ಅಶುಭವೋ ಎನ್ನುವುದ ನ್ನು ತಿಳಿದುಕೊಳ್ಳದೆ ಒದ್ದಾಡುತ್ತಾರೆ. ಅದಕ್ಕಾಗಿ ಅದರ ಬಗ್ಗೆ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ.ಮನೆಯಲ್ಲಿ ಕಳಸಕ್ಕೆ ಇಟ್ಟಿರುವ ಕಾಯಿ ಮೊಳಕೆ ಹೊಡೆದರೆ ನೀವು ಭಯ ಪಡಬೇಕಿಲ್ಲ. ಅದರ ಬಗ್ಗೆ ಯಾವುದೇ ಆತಂಕವೂ ಬೇಕಿಲ್ಲ. ಏಕೆಂದರೆ ಅದು ಮನೆ ಅಭಿವೃದ್ಧಿಯ ಸಂಕೇತವಾಗಿರುತ್ತದೆ.

ಕಳಸದ ಕಾಯಿ ಮೊಳಕೆ ಒಡೆದಂತೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆಯಸ್ಸು, ಆರೋಗ್ಯವು ಕೂಡ ಸಮೃದ್ಧಿ ಆಗುತ್ತದೆ. ಇನ್ನು ಇದರ ಸಂಕೇತದಾಗಿರುತ್ತದೆ. ಇದನ್ನು ತೆಗೆದ ನಂತರ ಆ ಕಾಯಿಯನ್ನು ನಿಮ್ಮ ಮನೆ ಹಿತ್ತಲಲ್ಲಿ ಅಥವಾ ಜಮೀನಿನಲ್ಲಿ ನೆಟ್ಟು ಬೆಳೆಸಲು ಪ್ರಯತ್ನಿಸ ಬೇಕು. ಸಾಧ್ಯವಾಗದೇ ಇದ್ದರೆ ನಾವು ಯಾವುದಾದರೂ ದೇವಸ್ಥಾನಕ್ಕಾದರೂ ಕೊಡಬಹುದು.

ಇನ್ನು ಒಂದು ವೇಳೆ ಕಾಯಿ ಬಿರುಕು ಬಿಟ್ಟಿದ್ದರೆ ಆಗಲೂ ಸಹ ಆತಂಕ ಪಡುವ ಅಗತ್ಯ ಇಲ್ಲ.ಎಕೆ ಎಂದರೆ ಮನೆಯ ವಾತಾವರಣದ ಕಾರಣ ಅದು ಆ ರೀತಿ ಆಗಿರುತ್ತದೆ. ಬೇರೆ ದಿನಗಳಲ್ಲಿ ತೆಂಗಿನ ಕಾಯಿಯನ್ನು ಬದಲಾಯಿಸಲು ತೆಗೆದಾಗ ತೆಗೆದ ಆ ತೆಂಗಿನಕಾಯಿಯಿಂದ ಸಿಹಿ ಪದಾರ್ಥಗಳನ್ನು ಮಾಡಿ ಮನೆಮಂದಿ ಗೆಲ್ಲ ಬಡಿಸಿದರೆ ಒಳ್ಳೆಯದು. 

Leave a Reply

Your email address will not be published. Required fields are marked *