ದೇವರ ಮುಂದೆ ವೀಳ್ಯದೆಲೆ ಹೇಗಿಡಬೇಕು? 

Featured Article

ಕಲಶಕ್ಕೆ ಇಟ್ಟ ವೀಳ್ಯದೆಲೆಯನ್ನು ಮತ್ತು ತಾಂಬೂಲ 

ಕೊಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು ನೋಡೋಣ ಬನ್ನಿ ಸ್ನೇಹಿತರೆ ಯಾರ ಮನೆಯಲ್ಲೇ ತಾಂಬೂಲ ಕೊಟ್ಟರು ತಂದು ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸ ಬೇಕು. ತಾಂಬೂಲ ಕೊಡುವಾಗ ದಂಟು ಅಂದರೆ ಮೂಲ ನಮ್ಮ ಕಡೆಗೆ ಇರಬೇಕು. ತುದಿ ತೆಗೆದುಕೊಳ್ಳುವವರ ಕಡೆ ಇರುವಂತೆ ಇರಿಸಿ ತಾಂಬೂಲ ಕೊಡಬೇಕು.ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ.

ತಾಂಬೂಲ ದಲ್ಲಿರುವ ವೀಳ್ಯದೆಲೆಯು ಸೂರ್ಯ ಗ್ರಹನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜಗ್ರಹ ನ್ನು ಪ್ರತಿನಿಧಿಸುತ್ತ ದೆ. ಹೀಗಾಗಿ ಸರಿಯಾದ ಪದ್ಧತಿ ಅನುಸರಿಸಿದರೆ ಮಾತ್ರವೇ ತಾಂಬೂಲದ ಪೂರ್ಣ ಫಲ ಒದಗಿ ಬರುತ್ತದೆ. ಕೆಲವರಿಗೆ ಒಬ್ಬರ ಮನೆಯಲ್ಲಿ ಕೊಟ್ಟ ತಾಂಬೂಲ ಅಥವಾ ಬ್ಲೌಸ್ ಪೀಸನ್ನು ಇಟ್ಟು ಬೇರೆಯವರಿಗೆ ಕೊಡುವ ಅಭ್ಯಾಸ ವಿರುತ್ತದೆ.

ಇದು ಬಹಳ ತಪ್ಪು. ನಿಮಗೆ ಸಿಕ್ಕ ಅದೃಷ್ಟವನ್ನು.ನೀವಾಗಿಯೇ ಬೇರೆಯವರಿಗೆ ಧಾರೆ ಎರೆದಂತೆ ಆಗುವುದು ಎಚ್ಚರ. ಪೂರ್ವ ಅಥವಾ ಉತ್ತರ ದಿಕ್ಕಿಗೆ ವೀಳ್ಯದೆಲೆಯ ತುದಿ ಬರುವ ಹಾಗೆ ಇಟ್ಟು ದೇವರಿಗೆ ನೈವೇದ್ಯ ಮಾಡಬೇಕು. ಹಸಿರಾಗಿರುವ ಮತ್ತು ಅಂದವಾಗಿ ತೂತಿಲ್ಲದ ಹರಿದಿರವುಂತಹ ವೀಳ್ಯದೆಲೆಯನ್ನು ದೇವರಿಗೆ ನೈವೇದ್ಯ ಮಾಡಬೇಕು ಮತ್ತು ತಾಂಬೂಲ ಕೊಡಬೇಕು. ಕಳಸಕ್ಕೆ ಬಿಳಿ ವೀಳ್ಯದೆಲೆಯನ್ನು ಇಡಬಾರದು.

ಇಟ್ಟರೆ ಸ್ತ್ರೀ ದೋಷ ಮತ್ತು ಶಾಪ ಉಂಟಾಗುತ್ತದೆ ದೇವರ ಪೂಜೆ ಗೆ ಮತ್ತು ಕಳಸಕ್ಕೆ ಇಟ್ಟಿರುವ ವೀಳ್ಯದೆಲೆಯನ್ನು ಎಲ್ಲೆಂದರಲ್ ಬಿಬಿಸಾಕಬಾರದು ಮತ್ತು ತುಳಿಯಬಾರದು. ಅದನ್ನು ನಾವು ಊಟದ ನಂತರ ಅಡಿಕೆ ಮತ್ತು ಸುಣ್ಣದ ಜೊತೆ ತಿನ್ನಬೇಕು. ಇದರಿಂದಾಗಿ ಪಚನ ಶಕ್ತಿ ಚೆನ್ನಾಗಿ ಆಗುವುದು. ಮಂಗಳವಾರ ಮತ್ತು ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಮನೆಯಿಂದ ಹೊರಗೆ ಹಾಕ ಬಾರದು ಅಥವಾ ಎಸೆಯ ಬಾರದು. ವೀಳ್ಯದೆಲೆಯ ಪ್ರತಿಯೊಂದು ಭಾಗದಲ್ಲಿಯೂ ಬೇರೆ ಬೇರೆ ದೇವತೆಗಳು ನೆಲೆಸಿರುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ವೀಳ್ಯದೆಲೆಯ ತುಂಬಿನಲ್ಲಿ.ಅಹಂಕಾರ ದೇವತೆ ಮತ್ತು ದಾರಿದ್ರ ಲಕ್ಷ್ಮಿ ವಾಸವಾಗಿರುತ್ತಾರೆ. ಆದ್ದರಿಂದಲೇ ವೀಳ್ಯದೆಲೆ ಹಾಕಿಕೊಳ್ಳುವಾಗ ತುಂಬು ಮುರಿದು ಹಾಕಿಕೊಳ್ಳುತ್ತಾರೆ. ವೀಳ್ಯದೆಲೆಯ ಬುಡದಲ್ಲಿ ಮೃತ್ಯು ದೇವತೆಯ ವಾಸ. ಈ ಕಾರಣಕ್ಕೆ ತಾಂಬೂಲ ಹಾಕಿಕೊಳ್ಳುವಾಗ ತುದಿಯ ಭಾಗ ತೆಗೆದು ಹಾಕಿಕೊಳ್ಳುವುದು ಉತ್ತಮ. ಎಲ್ಲಾದರೂ ತಾಂಬೂಲ ಕೊಟ್ಟರೆ ಅದನ್ನು ಬೇಡ ಅನ್ನ ಬೇಡಿ ಮತ್ತು ಎಲ್ಲೆಂದರಲ್ಲಿ ಬಿಸಾಡ ಬೇಡಿ.

ಪೂಜೆಯ ನಂತರ ಕಳಸದ ವೀಳ್ಯದೆಲೆಯನ್ನು ಪ್ರಸಾದ ರೂಪವಾಗಿ.ಮನೆಯ ಹಿರಿಯರು ಮತ್ತು ಮಗಳು ಅಳಿಯ ಇದ್ದರೆ ಮಾತ್ರ ಹಾಕಿಕೊಳ್ಳಬೇಕು. ಬೇರೆಯವರು ಹಾಕಿಕೊಳ್ಳ ಬಾರದು. ಕಳಸದ ವೀಳ್ಯದೆಲೆಯನ್ನು ಒಣಗಿಸ ಬಾರದು. ಒಂದು ವೇಳೆ ಕಸದ ಲ್ಲಿ ಗುಡಿಸಿದರೆ ಆ ಮನೆಗೆ ದಾರಿದ್ರ್ಯ ಬರುತ್ತದೆ.

ಕಳಸ ದೇವಿಯ ಶಾಪ ದಿಂದಾಗಿ ಸಂಪಾದಿಸಿದ ಹಣ ಬೇರೆಯವರ ಪಾಲಾಗುತ್ತದೆ ಮತ್ತು ಸಾಲ ಬಾಧೆ ಮತ್ತು ಶತ್ರು ಭಾದೆ ಹೆಚ್ಚಾಗುತ್ತದೆ. ಪೂಜಿಸಿದ ಕಳಸದ ವೀಳ್ಯದೆಲೆ ಯನ್ನು ಉಪಯೋಗಿಸಲು ಸಾಧ್ಯವಾಗದೇ ಇದ್ದಾಗ.ತುಳಸಿ ಕಟ್ಟೆಗೆ ಹಾಕಬೇಕು. ಸರ್ವ ತೀರ್ಥಗಳು ತುಳಸಿಯಲ್ಲಿ ಇರುವುದರಿಂದ ತುಳಸಿಯು ಶ್ರೇಷ್ಠವಾದದ್ದು. ಕಳಸದ ವೀಳ್ಯದೆಲೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು. ಇದರಿಂದಾಗಿ ನೆನೆದ ಕಾರ್ಯಗಳು ಬಹಳ ಬೇಗ ಈಡೇರುತ್ತವೆ.

Leave a Reply

Your email address will not be published. Required fields are marked *