ಪೂಜೆ ಮಾಡುವಾಗ ಕಣ್ಣೀರು ಆಕಳಿಕೆ,ನಿದ್ರೆ, ಕೆಟ್ಟ ಆಲೋಚನೆಗಳು ಬಂದ್ರೆ ಏನು ಸಂಕೇತ? ಪರಿಹಾರ ಏನು?

Featured Article

ನಾವು ಪುಣ್ಯ ಕ್ಷೇತ್ರಗಳಿಗೆ ಹೋದಾಗ ದೇವಸ್ಥಾನಗಳಿಗೆ ಹೋದಾಗ ಭಜನೆ ಮಾಡಿದಾಗ ಪೂಜೆ ಮಾಡುವಾಗ ಧ್ಯಾನ ಮಾಡುವಾಗ ನಮ್ಮ ಕಣ್ಣೀರು ಬರುತ್ತೆ. ಆಕಳಿಕೆ ಬರುತ್ತೆ. ನಿದ್ದೆ ಬರೋ ಹಂಗಾಗುತ್ತೆ. ತುಂಬಾ ಕೋಪ ಬರುತ್ತೆ ಅನ್ನೋ ಮಾತು ತುಂಬಾ ಜನದಾಗಿದೆ.ಅದಕ್ಕೆ ಕಾರಣ ಏನು ಅಂತ ಕೇಳ್ತಾರೆ. ಹಾಗಾಗಿ ಇದಕ್ಕೆ ಇವತ್ತು ನಾವು ಕಾರಣ ಏನು ಅದಕ್ಕೆ ಉತ್ತರ ಏನು ಅದಕ್ಕೆ ಪರಿಹಾರ ಏನು ಅಂತ ನಾವು ತಿಳಿದುಕೊಳ್ಳೋಣ ನೋಡಿ ನಾವು ದೇವರನ್ನು ಪೂಜೆ ಮಾಡುವಾಗ ಅದು ಸ್ವಚ್ಛವಾದ, ಶುದ್ದವಾದ, ಪ್ರಾಮಾಣಿಕವಾದ ತನ್ಮಯತೆಯಿಂದ ಮಾಡಿದಾಗ ಆ ಪೂಜೆಯನ್ನ ಭಗವಂತ ಸ್ವೀಕಾರ ಮಾಡುತ್ತಾನೆ.

ಇನ್ನು ನಾವು ಪೂಜೆ ಮಾಡುವಾಗ ನಮಗೆ ಕಣ್ಣೀರು ಬರ್ತಾ ಇದೆ ಮ. ದೇವರ ನೇರ ಸಂಪರ್ಕ ವನ್ನು ತಗೊಂಡು ಇರ್ತೀವಿ. ಆ ಪೂಜೆ ಸಫಲ ಆಗ್ತಿದೆ ಅನ್ನೋದು ಖುಷಿಯಿಂದ ನಮಗೆ ಕಣ್ಣೀರು ಬರುತ್ತಾ ಇರುತ್ತೆ. ಇನ್ನು ನಮಗೆ ಏನಾದ್ರೂ ಕಣ್ಣೀರು ಬರ್ತಾ ಇದೆ ಅಂತಂದ್ರೆ ಭಗವಂತ ನಮಗೆ ಯಾವುದೋ ಒಂದು ಸಂದೇಶವನ್ನು ಕೊಡುತ್ತಾ ಇದಾನೆ ಅನ್ನೋ ಒಂದು ಸಂಕೇತ ವನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಇನ್ನು ಕಣ್ಣಲ್ಲಿ ನೀರು ಬರುತ್ತೆ ಅಂದ್ರೆ ನಮ್ಮ ಅಂತರ್ಮನ ನಮ್ಮ ಆತ್ಮ ಶುದ್ಧಿ ಆಗ್ತಾ ಇರುತ್ತೆ. ನಮ್ಮ ಮನಸ್ಸಿನಲ್ಲಿರುವಂತಹ ಕೆಟ್ಟ ವಿಚಾರಗಳೆಲ್ಲವೂ ದೂರ ಆಗ್ತಾ ಇರುತ್ತೆ.ಎಷ್ಟೋ ಕರ್ಮ ದೋಷಗಳು ಆ ಕಣ್ಣೀರಿನ ರೂಪದಲ್ಲಿ ದೂರ ಆಗ್ತಾ ಇರುತ್ತೆ. ಅದರಿಂದ ಮುಕ್ತಿ ಪಡಿತಾ ಇದ್ದೀವಿ. ಶುದ್ಧವಾಗಿ ಇದ್ದೀವಿ ಅಂತ ಅರ್ಥ ಮಾಡಿಕೊಳ್ಳಬೇಕು. ಇನ್ನು ಜೊತೆಗೆ ನಮ್ಮ ಹೃದಯದಲ್ಲಿ ಯಾವುದೋ ಹೇಳಿಕೊಳ್ಳಕ್ಕೆ ಆಗದೇ ಇರುವಂತಹದ್ದು ಭಯ ನೋವು ಇರುತ್ತೆ.

ಅದನ್ನ ನಾವು ದೇವರ ಪೂಜೆ ಮಾಡುವಾಗ ಅಥವಾ ನಾವು ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆ ದೇವರ ನೋಡಿದಾಗ ನಮ್ಮಲ್ಲಿ ಇಂತಹ ನೋವು ಎಲ್ಲವೂ ಸಹ ಭಗವಂತನ ನೋಡಿ ತಕ್ಷಣ ಬರುತ್ತೆ. ಅದು ಕಣ್ಣೀರು ರೂಪದಲ್ಲಿ ಬರ್ತಾ ಇರುತ್ತೆ. ಆ ಭಗವಂತನಿಗೆ ನಾವು ಅದನ್ನ ಸಮರ್ಪಣೆ ಮಾಡ್ತಾ ಇದೀವಿ ಅದಕ್ಕೆ ಪರಿಹಾರ

ಒಳ್ಳೆಯದು ಆಗ ಬೇಕು ಅನ್ನೋ ಒಂದು ರೀತಿಯಲ್ಲಿ ಭಗವಂತನಲ್ಲಿ ನಾವು ಸ್ಮರಣ ಮಾಡ್ತಾ ಇರೋದ್ರಿಂದ ಆ ದುಃಖ ಎಲ್ಲ ಆಚೆ ಬರ್ತಾ ಇರುತ್ತೆ. ಅದು ಕಣ್ಣೀರಿನ ರೂಪದಲ್ಲಿ ಬರ್ತಾ ಇರುತ್ತೆ. ಹಾಗಾಗಿ ನಮ್ಮಲ್ಲಿ ತಕ್ಕಂತ ದುಃಖ, ನೋವು ಎಲ್ಲವೂ ಸಹ ಭಗವಂತನಿಗೆ ಸಮರ್ಪಣೆ ಆಗ್ತಾ ಇರುತ್ತೆ. ಸಂಪೂರ್ಣವಾದ ಮಾಹಿತಿಗಾಗಿ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *