ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಬೇಡ ಎನ್ನಬೇಡಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

Featured Article

ಕೆಲವೊಮ್ಮೆ ನಮ್ಮ ಸುತ್ತಮುತ್ತಲು ಅದೃಷ್ಟ ಇದ್ದರು. ಕಾಣುವುದಿಲ್ಲ. ಬಡವ ಶ್ರೀಮಂತನಾಗಲು ಶ್ರೀಮಂತ ಬಡವ ಆಗಲು ಹೆಚ್ಚು ಸಮಯ ಬೇಕಾಗುವುದಿಲ್ಲ.ಅದೃಷ್ಟ ಎಂಬುದು ಇದ್ರೆ ಭಿಕ್ಷುಕ ಕೂಡ ಶ್ರೀಮಂತನಾಗುತ್ತಾನೆ. ಅದೃಷ್ಟವೆಂದರೆ ಮತ್ತೆ ದೈವ ಕೃಪೆ ಆಗಿದೆ. ಏಳು ನಮ್ಮ ಪ್ರಯತ್ನವಾದರೆ ಎಂಟನೆಯದು ದೇವರ ಕೃಪೆಯಾಗಿದೆ. ಇದೆ ಅದೃಷ್ಟ ಜೀವನದಲ್ಲಿ ಕೆಲವು ಲಕ್ಷಣಗಳು ಮುಂದಿನ ದಿನಗಳಲ್ಲಿ ಅದೃಷ್ಟ ಹುಡುಕಿ ಬರುವುದರ ಸೂಚನೆಯಾಗಿರುತ್ತದೆ. ಆ ಸೂಚನೆ ಯಾವುದು ಎಂದು ನೋಡೋಣ ಬನ್ನಿ

ಎದ್ದ ತಕ್ಷಣ ಗೊವಿನ ದರ್ಶನ ಗಂಟೆನಾದ ಕೇಳಿದರೆ ಪಕ್ಷಿಗಳ ಧ್ವನಿ ಕೇಳಿಸಿದರೆ ಮುತ್ತೈದೆಯ ನೋಡಿದರೆ ಅಥವಾ ಹೊರಗಡೆ ಹೋಗುವಾಗ ತುಂಬಿದ ಕೊಡ ಪಾತ್ರೆ ತುಂಬಿದ ಹಾಲು ಅಥವಾ ಎಳನೀರು ಕಂಡಲ್ಲಿ ಮುಂದೆ ನಿಮ್ಮ ಜೀವನದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವುದರ ಸೂಚನೆಯಾಗಿದೆ. ಕೆಲವು ಪಕ್ಷಿಗಳು ಬೆಳಗ್ಗೆ ಎದ್ದ ತಕ್ಷಣ ಕಾಣಿಸಿಕೊಂಡರೆ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಪೊಸೆಟಿವ್ ಎನರ್ಜಿ ಜಾಸ್ತಿ ಇದ್ದು, ಆ ದಿನ ತುಂಬಾ ಸಂತೋಷ ವೆನಿಸಿದರೆ ಮುಂದಿನ ದಿನಗಳಲ್ಲಿ ಅದೃಷ್ಟ ನಿಮ್ಮದಾಗಲಿದೆ ಎಂದರ್ಥ.

ಬೆಳಿಗ್ಗೆ ಎದ್ದ ತಕ್ಷಣ ಧನ ಲಾಭವಾಗುವುದು ಕೂಡ ನಿಮ್ಮ ಜೀವನ ಮುಂದೆ ಬದಲಾಗಲಿರುವ ಲಕ್ಷಣವಾಗಿದೆ. ಕೆಲವು ವಸ್ತು ಎಲ್ಲಿ ಸಿಕ್ಕಿದರು ನಿರಾಕರಿಸಬಾರದು. ಆ ವಸ್ತುಗಳು ಯಾವುದೆಂದು ನೋಡೋಣ ಬನ್ನಿ.ಒಂದು ಸತ್ಯನಾರಾಯಣ ಪ್ರಸಾದವನ್ನು ಯಾವಾಗಲೂ ನಿರಾಕರಿಸ ಬಾರದು ಯಾರೇ ಸತ್ಯನಾರಾಯಣಗೆ ಕರೆದರು ಹೋಗಿ ಪ್ರಸಾದವನ್ನು ತೆಗೆದುಕೊಂಡು ಬರಬೇಕು.

ಪ್ರಸಾದ ಸಿಗದಿದ್ದಲ್ಲಿ ಕೇಳಿ ತೆಗೆದುಕೊಳ್ಳಬೇಕು. ಹಿರಿಯರು ಕದ್ದಾದರೂ ತಿನ್ನ ಬೇಕು ಎನ್ನುತ್ತಾರೆ.ಪ್ರಸಾದವನ್ನು ತಿಂದರು ಶ್ರೀ ವಿಷ್ಣುವಿನ ಪ್ರೀತಿಗೆ ಪಾತ್ರರಾಗಿ ಅದೃಷ್ಟ ಬದಲಾಗುವುದು ಸತ್ಯನಾರಾಯಣ ಪ್ರಸಾದವನ್ನು ಯಾವಾಗಲೂ ನಿರಾಕರಿಸಬೇಡಿ ಎರಡು ಶಿವನನ್ನು ಪೂಜಿಸಿದ ನಂತರ ಪೂಜೆಯ ಪ್ರಸಾದವನ್ನು ಯಾವಾಗಲೂ ನಿರಾಕರಿಸಬೇಡಿ. ಶಿವನ ಪೂಜೆ ಸಿಕ್ಕಿಲ್ಲ ಎಂದರು ಪ್ರಸಾದ ದಿಂದ ಪೂಜೆಯನ್ನು ನೋಡಿದ ಫಲ ದೊರೆಯುವುದು ಮೂರು ದಾರಿಯಲ್ಲಿ ಸಿಕ್ಕ ಹಣವನ್ನು ನೀವೇ ಇಟ್ಟುಕೊಳ್ಳಿ. ಇದು ಲಕ್ಷ್ಮಿಯ ಪ್ರತಿಕ ಹೀಗೆ ರಸ್ತೆಯಲ್ಲಿ ಸಿಕ್ಕ ಹಣ ಅಥವಾ

ನಾಣ್ಯ ಸಿಕ್ಕರೆ ಲಕ್ಷ್ಮೀ ದೇವಿಯ ಕೃಪೆ ನಿಮಗೆ ಆಗಿದೆ ಎಂದರ್ಥ ಹೀಗಾಗಿ ಆ ಹಣವನ್ನು ನೀವೇ ಇಟ್ಟುಕೊಳ್ಳಿ. ಅದನ್ನು ಯಾರಿಗೂ ಕೊಡಬೇಡಿ .ನಾಲ್ಕು ಹಸು ನಿಮ್ಮ ಮನೆಯ ಬಾಗಿಲಿಗೆ ಬಂದರೆ ಶುಭ ವಾರ್ತೆ ಬರುವುದು ಅಥವಾ ಯಾವುದೋ ನಿಂತಿದ್ದ ಕೆಲಸ ಆಗುವುದು ಎಂದರ್ಥ. ಅದಕ್ಕೆ ಬಾಳೆಹಣ್ಣು, ಅನ್ನ, ಅನ್ನಕ್ಕೆ ಬೆಲ್ಲ ಹಾಕಿ ನೀಡಿ ಅರಿಶಿನ ಕುಂಕುಮ ವನ್ನು ಹಚ್ಚಿ ನಮಸ್ಕರಿಸಿ ಇದರಿಂದ ಮುಕ್ಕೋಟಿ ದೇವತೆಗಳು ಪ್ರೀತಿ ಪಾತ್ರರಾಗುತ್ತಾರೆ.

ಐದು ನೀವು ಊಟ ಮಾಡುವಾಗ ಯಾರಾದರೂ ಬಂದರೆ ಬರಿ ಕೈಯಲ್ಲಿ ಕಳಿಸಬೇಡಿ. ಆ ಸಮಯದಲ್ಲಿ ಮನೆಗೆ ಬಂದ ಭಿಕ್ಷುಕರಿಗೆ ₹1 ನಾಣ್ಯವನ್ನಾದರೂ ಕೊಟ್ಟು ಕಳುಹಿಸಿ ಬರಿಗೈಯಲ್ಲಿ ಕಳಿಸಬೇಡಿ.ಆರು ಇನ್ನು ಮನೆಗೆ ಹಿರಿಯರು ಯಾರೇ ಬಂದರೆ ಅವರ ಕಾಲಿಗೆ ನಮಸ್ಕರಿಸುವುದು ಸಂಪ್ರದಾಯ. ಇದರಿಂದ ಜೀವನದಲ್ಲಿ ಅಭಿವೃದ್ಧಿ ಆಗುವುದು ಹಿರಿಯರ ಆಶೀರ್ವಾದವನ್ನು ನಿರಾಕರಿಸ ಬೇಡಿ. ಸಕಲ ಸೌಭಾಗ್ಯ ದೊರೆಯುವುದು ಇದರಿಂದ ಅದೃಷ್ಟ ಬದಲಾಗುವುದು. ಯಾವಾಗಲೂ ಗುರು ಹಿರಿಯರಿಂದ ಆಶೀರ್ವಾದವನ್ನು ನಿರಾಕರಿಸಬೇಡಿ. 

Leave a Reply

Your email address will not be published. Required fields are marked *