ಎಲ್ಲರಿಗೂ ನಮಸ್ಕಾರ. ಪರಮಶಿವನನ್ನು ಆರಾಧಿಸಲು ಪೂಜಿಸಲು ಅದ್ಭುತವಾದ. ಪರಿಣಾಮಕಾರಿ ಸುಲಭ ಮಂತ್ರಗಳ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಹಾಗು ಈ ಮಂತ್ರ ವನ್ನು ಜಪಿಸುವುದರಿಂದ ಬರುವ ಲಾಭಗಳೇನು ಅದರಿಂದ ನಮ್ಮ ಮೇಲೆ ಬೀಳುವ ಪರಿಣಾಮವೇನು ಅನ್ನುವ ವಿಷಯದ ಬಗ್ಗೆ ತಿಳಿಯೋಣ ಬನ್ನಿ.ಸ್ನೇಹಿತರೇ ದೇವರುಗಳಲ್ಲಿ ಪರಮಶಿವನನ್ನು ಮನ ಸ್ಪೂರ್ತಿಯಾಗಿ ಆರಾಧಿಸಿದರೆ ಬೇಗ ಒಲಿದು ಬಿಡುತ್ತಾನೆ ಮತ್ತು ಬೇಡಿದ ವರ ಮವನ್ನು ಕರುಣಿಸುತ್ತಾನೆ ಎಂಬುದು ಅಚಲವಾಗಿರುವ ನಂಬಿಕೆ.ಶಿವನ ಆರಾಧನೆಯಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳ ಲಾಗುತ್ತದೆ.
ಶಿವನ ಆರಾಧನೆಗೆ ಹಲವು ಮಂತ್ರ ಗಳಿವೆ.
ಅದರಲ್ಲಿ ಸುಲಭವಾಗಿರುವ ಕೆಲವು ಮಂತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.ಮೊದಲನೆಯದಾಗಿ ಶಿವ ಪಂಚಾಕ್ಷರಿ ಮಂತ್ರ ಓಂ ನಮಶಿವಾಯ ಇದರರ್ಥ ನಾನು ಶಿವನಿಗೆ ನಮಸ್ಕರಿಸುತ್ತೇನೆ. ಶಿವ ಇಲ್ಲಿ ಸರ್ವೋಚ್ಛ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಿವ ಇಲ್ಲಿ ಆಂತರಿಕ ಆತ್ಮ.ಈ ಮಂತ್ರವನ್ನು ಪಠಿಸುವುದರಿಂದ ನೀವು ನಿಮ್ಮ ಅಂತರಾತ್ಮವನ್ನು ಕರೆಯುತ್ತೀರಿ ಭಜಿಸುತ್ತೀರಿ.
![](https://trendyduniyakannada.com/wp-content/uploads/2024/02/IMG-20240202-WA0006-3-1024x1024.jpg)
ಸುರಕ್ಷತೆ ಮತ್ತು ರಕ್ಷಣೆಯನ್ನು ಬಯಸುತ್ತಿರುವ ವರಿಗಾಗಿ ಶಿವ ಪಂಚಾಕ್ಷರಿ ಮಂತ್ರ ಬಹಳ ಒಳ್ಳೆಯದು.ನಿಮ್ಮೊಳಗಿನ ಶಕ್ತಿಯನ್ನು ಇದು ಅಭಿವೃದ್ಧಿಪಡಿಸುತ್ತದೆ ಮತ್ತು ಜೀವನವನ್ನು ಧನಾತ್ಮಕ ಶಕ್ತಿಯಿಂದ ಭರ್ತಿ ಮಾಡುತ್ತದೆ.
ಈ ಮಂತ್ರವನ್ನು ಪ್ರತಿಯೊಬ್ಬರೂ ಹೇಳಬಹುದು ಮತ್ತು ಇದಕ್ಕೆ ಯಾವುದೇ ನಿಯಮಗಳಿಲ್ಲ. ನೀವು ಇದನ್ನು ಎಲ್ಲಿ ಬೇಕಿದ್ದರೂ ಯಾವಾಗ ಬೇಕಿದ್ದರೂ ಪುನರಾವರ್ತಿ ಸುತ್ತಿರಬಹುದು.ಎರಡನೆಯ ದು ಮಹಾ ಮೃತ್ಯುಂಜಯ ಮಂತ್ರ ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧ ನಾನ್ ಮೃತ್ಯೊರ್ಮುಕ್ಷೀಯ ಶಿವನ ಬಹಳ ಶಕ್ತಿಶಾಲಿ ಮಂತ್ರ ಎಂದು ಮೃತ್ಯುಂಜಯ ಮಂತ್ರಕ್ಕೆ ಹೇಳಲಾಗುತ್ತದೆ.ಓಂ ನಮಂ ಶಿವಾಯಃ ವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು.
ಆದರೆ ಈ ಮೃತ್ಯುಂಜಯ ಮಂತ್ರಕ್ಕೆ ಕೆಲವು ನಿಯಮಗಳಿವೆ.ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳ ಬೇಕು ಎಂಬುದನ್ನು ನೀವು ಅರಿತಿರ ಬೇಕಾದ ಅಗತ್ಯತೆ ಇದೆ.ಈ ಮಂತ್ರ ವನ್ನು ಹೇಳುವುದರಿಂದ ಆಗಿ ನಿಮ್ಮ ಜೀವನಕ್ಕೆ ಶಕ್ತಿ ಮತ್ತು ಇತರೆ ಕೆಲವು ಪ್ರಮುಖರಲ್ಲಿ ಲಾಭಗಳಾಗುತ್ತದೆ ಸಂಸ್ಕೃತ ಶಬ್ದವಾಗಿರುವ ಮೃತ್ಯುಂಜಯ ಎಂದರೆ ಸಾವನ್ನು ಗೆಲುವನ್ನು ಎಂದರ್ಥ. ನಿಮ್ಮ ಸಾವಿನ ಬಗ್ಗೆ ನಿಮಗಿರುವ ಭಯವನ್ನು ಹೋಗಲಾಡಿಸಿಕೊಳ್ಳಲು ಮತ್ತು ಆ ನಿಟ್ಟಿನಲ್ಲಿ ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುವಾಗ ಈ ಮಂತ್ರ ವನ್ನು ಪಠಿಸುವುದು ಒಳ್ಳೆಯದು.ಸ್ನೇಹಿತರೇ ಮೂರನೆಯದಾಗಿ ರುದ್ರ ಮಂತ್ರ ಓಂ ನಮೋ ಭಗವತೇ ರುದ್ರಾಯ ಈ ರುದ್ರ ಮಂತ್ರವು ಶಿವನನ್ನು ತಲುಪಲು ಇರುವ ಹತ್ತಿರದ ಮಾರ್ಗ ಎಂದು ಹೇಳ ಬಹುದು.
ಮಹಾ ಶಿವ ನಿಂದ ಆಶೀರ್ವಾದ ಪಡೆಯುವುದಕ್ಕಾಗಿ ಈ ಮಂತ್ರವನ್ನು ಬಳಸಲಾಗುತ್ತದೆ. ಶಿವ ನಿಂದ ನಿಮ್ಮ ಇಷ್ಟಾರ್ಥ ಸಿದ್ಧಿ ಸುವುದಕ್ಕಾಗಿ ಈ ಮಂತ್ರ ಪಠಣೆ ಮಾಡಬಹುದು.ನಾಲ್ಕನೆಯದು ಶಿವ ಗಾಯತ್ರಿ ಮಂತ್ರ ಓಂ ತತ್ಪುರುಷಾಯ ವಿದ್ಮಹೇ ಮಹಾ ದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯ.ಇಂದು ಮಂತ್ರಗಳಲ್ಲಿ ಗಾಯತ್ರಿ ಮಂತ್ರ ವು ಅತ್ಯಂತ ಶಕ್ತಿಶಾಲಿಯಾಗಿರುವ ಮಂತ್ರ ಎಂಬುದು ಎಲ್ಲರಿಗೂ ತಿಳಿದಿದೆ.ಅದರಲ್ಲಿ ಇದು ಶಿವ ಗಾಯತ್ರಿ ಮಂತ್ರ ನಿಮ್ಮ ಮನಶಾಂತಿ ಯನ್ನು ನೀವು ಬಯಸುತ್ತಿದ್ದರೆ ಮತ್ತು ಶಿವನನ್ನು ಭಜಿಸಬೇಕು ಎಂದು ಅಂದುಕೊಳ್ಳುತ್ತಿದ್ದರೆ ಈ ಮಂತ್ರ ವನ್ನು ಹೇಳಬಹುದು.
![](https://trendyduniyakannada.com/wp-content/uploads/2024/02/IMG-20240202-WA0006-2-1024x1024.jpg)